ತುಮಕೂರು


ಜನರು ನಮಗೆ ಗೌರವ ಕೊಡುತ್ತಾರೆ ಎಂದರೆ, ಅವರು ನಮ್ಮಿಂದ ಕೆಲವನ್ನು ನಿರೀಕ್ಷಿಸುತ್ತಾರೆ.ಹಾಗಾಗಿ ಪುರೋಹಿತರಾಗಿರುವ ನಾವುಗಳು, ಜನರ ನಿರೀಕ್ಷೆಗೆ ತಕ್ಕಂತೆ, ಆಚಾರ, ವಿಚಾರ, ಉಡುಗೆ, ತೊಡುಗೆಗಳನ್ನು ಹೊಂದುವುದು ಸೂಕ್ತ ಎಂದು ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ(ರಿ)ನ ತುಮಕೂರು ಜಿಲ್ಲಾ ಶಾಖೆ ಉದ್ಘಾಟನೆ ಹಾಗೂ ಶ್ರೀವೀರಭದ್ರೇಶ್ವರರ ಜಯಂತೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತಿದ್ದ ಅವರು,ಮಂತ್ರಗಳ ಸ್ಪಷ್ಟ ಉಚ್ಚಾರಣೆಯ ಜೊತೆಗೆ,ಅವುಗಳ ಅರ್ಥವನ್ನು ಜನರಿಗೆ ಬಿಡಿಸಿ ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ, ಎಂದಿಗೂ ಮಂತ್ರಕ್ಕಾಗಿ ಮೊಬೈಲ್ ಮೊರೆ ಹೋಗಬೇಡಿ ಎಂದು ಕಿವಿ ಮಾತು ಹೇಳಿದರು.
ತುಮಕೂರಿನ ಹಿರೇಮಠದ ವತಿಯಿಂದ ಹಳೆ ನಿಜಗಲ್ ಬಳಿ ನಿರ್ಮಾಣವಾಗಿರುವ ಶ್ರೀವೀರಭದ್ರಸ್ವಾಮಿ ತಪೋವನದಲ್ಲಿ ವೇದೋಪನಿಷತ್ತಿನ ಜೊತೆಗೆ, ರುದ್ರ, ಅಷ್ಟೋತ್ತರ ಸೇರಿದಂತೆ ಹಲವು ಮಂತ್ರ ಕಲಿಸುವ ತರಗತಿಯನ್ನು ಮೇಲಿಂದ ಮೇಲೆ ನಮ್ಮ ನೇತೃತ್ವದಲ್ಲಿಯೇ ಆಯೋಜಿಸಲಾಗುತ್ತದೆ. ತಮ್ಮಲ್ಲಿ ಯಾರಾದರು ಕಲಿಯಲು ಆಸಕ್ತಿ ಉಳ್ಳವರು ಬಂದರೆ, ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಡಾ.ಶ್ರೀಶಿವಾನಂದಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯ ನಿರ್ದೇಶಕ
ದೇವರಾಜ ಶಾಸ್ತ್ರಿಗಳು, 2018ರಿಂದಲೂ ಈ ಸಮಾವೇಶ ನಡೆಸಬೇಕೆಂಬ ನಮ್ಮ ಕನಸು ಇಂದು ನೆರವೇರಿದೆ.ವಿವಿದ ಸಂಸ್ಕøತಿ, ಪರಂಪರೆಯನ್ನು ಹೊಂದಿರುವ ಭಾರತದಲ್ಲಿ ವೀರಶೈವ ಸಂಸ್ಕøತಿ ಅತ್ಯಂತ ಶ್ರೇಷ್ಠವಾದುದ್ದು, ಪಾವರ್ತಿ, ಪರಮೇಶ್ವರರ ಅಶೀರ್ವಾದದ ಫಲವಾಗಿ ಹುಟ್ಟಿದ ಶ್ರೀವೀರಭದ್ರಸ್ವಾಮಿಗೆ ವೇದ, ಉಪನಿಷತ್ತುಗಳಲ್ಲಿಯೂ ಪ್ರಮುಖ ಸ್ಥಾನವಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಡಿಯೂರಿನ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿಯ ಶ್ರೀ ರೇವಣ್ಣ ಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿ, ಸಿದ್ದರ ಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತೆವಡಹಳ್ಳಿಯ ಶ್ರೀಚನ್ನಬಸವೇಶ್ವರ ಶಿವಾಚಾರ್ಯಸ್ವಾಮೀಜಿ ವಹಿಸಿದ್ದರು.ವೇದಿಕೆಯಲ್ಲಿ ಅಕವೀಪುಮಹಾಸಭಾ ರಾಜ್ಯಪ್ರಧಾನ ಕಾರ್ಯದರ್ಶಿ ಕೆ.ಎಸ್.ವೀರಪ್ಪದೇವರು, ತುಮಕೂರು ಜಿಲ್ಲಾಧ್ಯಕ್ಷ ಟಿ.ಆರ್.ರುದ್ರೇಶ ಶಾಸ್ತ್ರಿಗಳು ಮತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗುಬ್ಬಿಯ ಲಿಖಿತ್,ಅರೆಯೂರಿನ ಎ.ಎಂ.ಭೂಮಿಕಾ, ಜೋನಿಗರಹಳ್ಳಿಯ ಪ್ರೀತಂ, ಮಾಕನಹಳ್ಳಿ ಭೂಮಿಕಾ, ಕುಂಭಿಪಾಳ್ಯದ ಕುಮಾರಿ ಹರ್ಷಿತಾ, ರುದ್ರೇಶ್ ಅವರುಗಳನ್ನು ಅಭಿನಂದಿಸಲಾಯಿತು
ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆಗೆ ತುಮಕೂರು ನಗರ ಶಾಸಕ ಜಿ.ಬಿ,ಜೋತಿಗಣೇಶ್ ಚಾಲನೆ ನಗರದ ಟೌನ್‍ಹಾಲ್ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಶ್ರೀವೀರಭದ್ರಸ್ವಾಮೀಯ ಪುತ್ಥಳಿಯನ್ನು ವೇಧ ಘೋಷ, ರುದ್ರ ಪಠಣ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನದ ಮೂಲಕ ಉತ್ಸವ ನಡೆಸಲಾಯಿತು.

(Visited 2 times, 1 visits today)