ತುಮಕೂರು


ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಅಂಗನವಾಡಿ ನೌಕರರನ್ನು ಉದ್ದೇಶಿಸಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕಮಲಮ್ಮ ಅವರು, ಸುಪ್ರೀಂ ಕೋರ್ಟ್ ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು’ ಎಂಬ ಐತಿಹಾಸಿಕ ತೀರ್ಪು ನೀಡಿದೆ. ಇದರ ಪ್ರಕಾರ ರಾಜ್ಯದಾದ್ಯಂತ ಸಾವಿರಾರು ನಿವೃತ್ತಿ ನೌಕರರು ಅರ್ಜಿಯನ್ನು ಸ್ವತಃ ಹಾಗೂ ಅಂಚೆ ಮುಖಾಂತರ ಸಲ್ಲಿಸಿದರೆ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದರು.
ಹಲವಾರು ನೌಕರರಿಗೆ ನೇಮಕಾತಿ & ನಿವೃತ್ತಿಯ
ಆದೇಶಗಳನ್ನು ನೀಡಿಲ್ಲ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಬೇಕಾದ ದಾಖಲಾತಿಗಳನ್ನು ಹೊಂದಿಸಿ ಕೊಳ್ಳಲು ಬಿಡದ ಇಲಾಖೆಯ ವ್ಯವಸ್ಥೆಯನ್ನು ಸರಿಪಡಿಸಬೇಕು.ಗ್ರಾಚ್ಯುಟಿಗೆ ಸಲ್ಲಿಸಿರುವ ಅರ್ಜಿದಾರರಿಗೆ ಕೂಡಲೇ ಪರಿಹಾರ ನೀಡಲು “ರಾಜ್ಯ ಸಚಿವ ಸಂಪುಟ” ಆದೇಶಿಸ ಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರು ಹಾಗೂ ಸಹಾಯಕರನ್ನು ಯೋಜನೇತರ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದು, ಸ್ಕೌಟ್ಸ್ ಗೈಡ್ಸ್ ಕಾರ್ಯಕ್ರಮ, ಕೋಟಿಕಂಠಗಾಯನ, ಮುಖ್ಯ ಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಗಳ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಕೂಡಲೇ ನಿಲ್ಲಬೇಕು ಎಂದರು
48 ವರ್ಷಗಳಿಂದ ಲಕ್ಷಾಂತರ ಅಂಗನವಾಡಿ ಮಹಿಳೆಯರಿಗೆ ಗೌರವ ಧನ ಮಾತ್ರ ಕೊಟ್ಟು ದುಡಿಸಿ ಕೊಳ್ಳುತ್ತಿದೆ. ಆದರೆ ಅವರಿಗೆ ಸಮಯಕ್ಕೆ ಸರಿಯಾಗಿ ಗೌರವಧನ, ಮೊಟ್ಟೆ ಹಣ, ಬಾಡಿಗೆ ಪಾವತಿಯಿಲ್ಲ ಆದರೆ ‘ಕೆಲಸ ಮಾತ್ರ ಮಾಡಬೇಕು’ ಎಂಬ ಧೋರಣೆ ಹೆಚ್ಚಿದ್ದು,ಕೋೀಲಾರ ಜಿಲ್ಲೆಯಲ್ಲಿ 3 ಜನ, ನಂಜನಗೂಡಿನಲ್ಲಿ 5 ಜನ, ತುಮಕೂರು ಜಿಲ್ಲೆಯಲ್ಲಿ ಒಬ್ಬರನ್ನು ಕೆಲಸದಿಂದ ತೆಗೆದಿರುವುದು ಇವರನ್ನು ಕೂಡಲೇ ಕೆಲಸಕ್ಕೆ ತಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹೊಸದಾಗಿ ಪ್ರಾರಂಭವಾಗುತ್ತಿರುವ 4,500 ಅಂಗನವಾಡಿ ಕೇಂದ್ರಗಳನ್ನು ಈಗಾಗಲೇ ಇರುವ ಮಿನಿ ಅಂಗನವಾಡಿ ಕೇಂದ್ರಗಳನ್ನಯ ಇದರಡಿಯಲ್ಲಿ ಪೂರ್ಣ ಕೇಂದ್ರಗಳಾಗಿ ಪರಿವರ್ತಿಸಬೇಕು, ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಸಿಐಟಿಯು ಸಂಘಟನೆಯ ಜಿಲ್ಲಾ ಅಧ್ಯಕ್ಷ ರಾದ ಮುಜೀಬ್,ಅಂ ನೌ ಸಂಘದ ಪ್ರ ಕಾರ್ಯದರ್ಶಿ ಗುಲ್ಜಾರ್, ಖಜಾಂಚಿ ಬಿ.ಎಸ್ ಅನುಸೂಯ ಅಧ್ಯಕ್ಷರಾದ ಜಿ ಕಮಲ ಮಾತನಾಡಿದರು. ಹೋರಾಟದ ನಾಯಕತ್ವವನ್ನ ಪುಷ್ಪ,ಪೂರ್ಣಮ್ಮ,ಗಾಯತ್ರಿ, ಪಾರ್ವತಮ್ಮ, ಶಿವಗಂಗಮ್ಮ,ಅನಸೂಯ ಸರೋಜ,ವಸಂತ,ಶೃತಿ ಶಾಂತಕುಮಾರಿ ,ಗಂಗಮ್ಮ, ಪ್ರೇಮ, ಗೌರಮ್ಮ, ಜಬೀನ, ವನಜಾಕ್ಷಿ, ಆದಿಲಕ್ಷೀ, ಮಹಾದೇವಮ್ಮ ಪಾರ್ವತಮ್ಮ ಎಲ್ಲಾ ತಾಲ್ಲೋಕಿನ ಪದಾಧಿಕಾರಿಗಳು ವಹಿಸಿದ್ದರು.

(Visited 2 times, 1 visits today)