ಕೊರಟಗೆರೆ


ಸಾದರು ಎಂದರೆ ಸಜ್ಜನರು, ಒಳ್ಳೆಯ ಜನ ಎಂಬ ಉಲ್ಲೇಖಗಳಿವೆ ನಾನು ನಿಮ್ಮ ಸಹೋದರನಾಗಿ ಸಮುದಾಯಕ್ಕೆ ದ್ವನಿಯಾಗಿ ನಿಲ್ಲುತ್ತೇನೆ ಎಂದು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ ತಿಳಿಸಿದರು.
ಪಟ್ಟಣದ ಹಿಂದೂ ಸಾದರ ಸಮುದಾಯ ಭವದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಾದರ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮೂಲತಃ ಜೈನಾ ಸಮುದಾಯಕ್ಕೆ ಸೇರಿದವರು ನೀವು ಜೈನರು ಹಿಂಸೆಯನ್ನು ಮಾಡಿದವರಲ್ಲ. ನೀವು ಆ ಸಮುದಾಯದಿಂದ ಬಂದವರು.
ಪರಿವರ್ತನೆಯಲ್ಲಿ ನೀವು ಹಿಂದೂ ಧರ್ಮಕ್ಕೆ ಬಂದದಂತಹ ಸಮುದಾಯ ನಿಮ್ಮದು ಎಂದು ಹೇಳಿದರು.
ಜೈನರು, ಹಿಂದೂ, ಲಿಂಗಾಯತ ಮೂರು ಕಡೆ ನಿಮ್ಮ ಗುರುತುಗಳಿಗೆ ಶಾಂತಿಯುತ ಜೀವನ ನಡೆಸುವ ಸಮುದಾಯ ನಿಮ್ಮದಾಗಿದೆ. 1916ರಲ್ಲಿ ಮಂಡಿ ಹರಿಯಣ್ಣಯ್ಯ ಅಸೆಂಬ್ಲಿ ಮೈಸೂರಿನ ರಾಜ್ಯದಲ್ಲಿ ಸಚಿವರಾಗುತ್ತಾರೆ. ಪ್ರತಿನಿಧಿ ಸಭೆಗೆ ಸದಸ್ಯರನ್ನು ಮಾಡುತ್ತಾರೆ. ರಾಜಕೀಯದಲ್ಲಿ ಅಷ್ಟೋಂದು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ.
ಜಾಗೃತಿ ಮೂಡಿಸುವ ಸಲುವಾಗಿ ರಾಜಕೀಯ ಜಾಗೃತಿಯನ್ನು ಮೂಡಿಸಬೇಕು. ನಮಗೆ ಯಾರು ಶಕ್ತಿಯನ್ನು ನೀಡುತ್ತಾರೆ ಯಾರು ನಮ್ಮವರು ಎಂದು ಗುರುತಿಸುತ್ತಾರೆ ಅವರನ್ನು ಆಯ್ಕೆ ಮಾಡಬೇಕು. ನಾವು ಅಂದಿನಿಂದ ಸಾದರ ಸಮುದಾಯದ ಜೊತೆಯಲ್ಲಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಹಕರಿಸಿ. ಎಂದರು.
ರಾಜ್ಯ ಹಿಂದೂ ಸಾದರ ಸಮುದಾಯದ ರಾಜ್ಯಾಧ್ಯಕ್ಷ ರವಿಕುಮಾರ್ ಮಾತನಾಡಿ ನಮ್ಮ ಸಮುದಾಯ ಡಾ. ಜಿ ಪರಮೇಶ್ವರ ರವರ ರೀತಿಯಲ್ಲಿ ಸೌಮ್ಯ ಸ್ವಾಭಾವದವರು. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಕೋಟಿ ಅನುದಾನ ನೀಡಿದ್ದರು. ಬೇರೆ ಶಾಸಕರು ವರ್ಗಾವಣೆ ವಿಚಾರದಲ್ಲಿ ಲಕ್ಷಾಂತರ ರೂ ನೀಡಬೇಕು. ಆದರೆ ಒಂದೇ ಒಂದು ಮಾತು ಹಾಡದೇ ಬೇರೆಡೆ ವರ್ಗಾವಣೆ ಮಾಡುವ ಸೃಜನಶೀಲತೆ ವ್ಯಕ್ತಿ ಡಾ.ಜಿ ಪರಮೇಶ್ವರ್. ನಮ್ಮ ಸಮುದಾಯದ ಅಧಿಕಾರಿಗಳು ಉತ್ತಮ ಕೆಲಸ ಮಾಡಬೇಕಾದರೆ ಡಾ ಜಿ ಪರಮೇಶ್ವರ ರಂತಹ ಸಜ್ಜನ ರಾಜಕಾರಣಿ ಬೇಕು. ದಯವಿಟ್ಟು ಈ ಬಾರಿ ಹೆಚ್ಚಿನ ಮತಗಳಿಂದ ಅವರನ್ನು ಆಯ್ಕೆ ಮಾಡಲು ನಮ್ಮ ಸಮಾಜದವರು ಹೆಚ್ಚಿನ ಬೆಂಬಲ ನೀಡೋಣ ಎಂದರು.
ಜಾಗೃತಿ ಸಮಾವೇಶದಲ್ಲಿ ವಿಧಾನ ಪರಿಷತ್ ಮಾಜಿ ಶಾಸಕ ವೇಣು ಗೋಪಾಲ್, ತಾ.ಅಧ್ಯಕ್ಷ ಮಲ್ಲಪ್ಪ, ಪಪಂ ಸದಸ್ಯ ಎಡಿ ಬಲರಾಮಯ್ಯ, ಜಿಲ್ಲಾ ನಿರ್ದೇಶಕ ಹನುಮಾನ್, ಶ್ರೀನಿವಾಸ್ ಮೂರ್ತಿ, ಶ್ರೀಧರ್ ಜೂಜುವಾಡಿ, ಶಶಿಧರ್ ಗಂಕರನಹಳ್ಳಿ, ಹತ್ತಿಬೆಲೆ ಮಂಜುನಾಥ್, ಪ್ರಭಾಕರ್, ಬೆಂಗಳೂರು ಶಿವಶಂಕರ್, ಡೈರಿ ಅಧ್ಯಕ್ಷ ನಂಜೇಗೌಡ್ರು, ಕಾಕಿ ಶಿವಣ್ಣ, ಜಯರಾಮ್, ಆಟೋಕುಮಾರ್, ಪ್ರಕಾಶ್, ಲಾರಿ ಗೌಡ, ಲಕ್ಷ್ಮೀಕಾಂತ, ಹರೀಶ್ ಸೇರಿದಂತೆ ಸಮದಾಯದ ಮಹಿಳೆಯರು, ಯುವಕರು ಇದ್ದರು.

(Visited 1 times, 1 visits today)