ಕೊರಟಗೆರೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿ ಮನೆಯಲ್ಲಿದ್ದ ದವಸದಾನ್ಯದ ಜೊತೆ ಬಂಗಾರ ಮತ್ತು ನಗದು ಹಣವು ಸುಟ್ಟುಭಸ್ಮವಾಗಿ ರೈತ ತಿಮ್ಮಪ್ಪನಿಗೆ 8ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ದಿನ್ನೇಪಾಳ್ಯದ ತಿಮ್ಮಪ್ಪನ ತೋಟದ ಮನೆಯ ರೇಷ್ಮೆಶೇಡ್‌ನಲ್ಲಿ ಆಕಸ್ಮಿಕವಾಗಿ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗಿ ಮನೆಗೆ ಬೆಂಕಿ ಆವರಿಸಿಕೊಂಡು ಸುಮಾರು 8ಲಕ್ಷ ಮೌಲ್ಯದ ದವಸದಾನ್ಯ ಮತ್ತು ನಗದು ಸುಟ್ಟುಹೋಗಿದೆ.
Wಮ್ಮಪ್ಪನ ಮನೆಯಲ್ಲಿದ್ದ 2ಲಕ್ಷ ನಗದು ಹಣ, 5ಲಕ್ಷ ಬೆಲೆ ಬಾಳು ಬಂಗಾರ ಮತ್ತು ಬೆಳ್ಳಿ, ಶೇಂಗಾ, ತೊಗರಿಬೆಳೆ, ಜೋಳ, ರಾಗಿಯ ಜೊತೆಯಲ್ಲಿ ಜಮೀನು, ಮನೆಯ ದಾಖಲೆ ಸುಟ್ಟುಹೋಗಿವೆ. ಕುಟುಂಬದ ರೇಷನ್‌ಕಾರ್ಡು, ಆಧಾರ್‌ಕಾರ್ಡ್, ಪಾನ್‌ಕಾರ್ಡ್, ಮಕ್ಕಳ ಅಂಕಪಟ್ಟಿ ಸೇರಿದಂತೆ ವ್ಯಾಸಂಗ ಮಾಡುವ ಪುಸ್ತಕಗಳು ತಡರಾತ್ರಿಯ ಬೆಂಕಿಗೆ ಆಹುತಿ ಆಗಿವೆ.
ದಿನ್ನೇಪಾಳ್ಯದ ತಿಮ್ಮಪ್ಪ ಮಾತನಾಡಿ ತೋಟದ ಮನೆಯಲ್ಲಿ ತಡರಾತ್ರಿ ವಿದ್ಯುತ್ ಅವಗಢ ಸಂಭವಿಸಿದೆ. ನಮ್ಮ ಕುಟುಂಬದ 6ಜನ ಹೊರಗಡೆ ಮಲಗಿದ್ದೇವೆ ಇಲ್ಲವಾದ್ರೇ ನಮ್ಮ ಪ್ರಾಣಕ್ಕೂ ಕಂಟಕ ಆಗುತ್ತಿತ್ತು. ನಮಗೇ ಸುಮಾರು 8ಲಕ್ಷ ಮೌಲ್ಯದ ದವಸದಾನ್ಯ, ನಗದು ಮತ್ತು ಚಿನ್ನಾಭರಣ ನಾಶವಾಗಿವೆ. ದಯವಿಟ್ಟು ಸರಕಾರ ನಮಗೇ ಸಹಾಯಹಸ್ತ ನೀಡಬೇಕಿದೆ ಎಂದು ಮನವಿ ಮಾಡಿದರು.
ತಡರಾತ್ರಿ ಸಂಭವಿಸಿದ ಅಗ್ನಿ ಅವಗಡದಿಂದ ತೋಟದ ಮನೆಯ ತಿಮ್ಮಪ್ಪನಿಗೆ ಸುಮಾರು 8ಲಕ್ಷ ನಷ್ಟವಾಗಿದೆ. ನಷ್ಟದಿಂದ ನೊಂದಿರುವ ರೈತ ಕಣ್ಣಿರು ಹಾಕುತ್ತಿದ್ದು ಕಂದಾಯ ಮತ್ತು ಬೆಸ್ಕಾಂ ಇಲಾಖೆ ರಾಜ್ಯ ಸರಕಾರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಸಹಾಯಹಸ್ತ ನೀಡಬೇಕಿದೆ. ಬೆಸ್ಕಾಂ ಇಲಾಖೆ ಎಇಇ ನೇತೃತ್ವದ ತಂಡ ಈಗಾಗಲೇ ಸ್ಥಳಕ್ಕೆ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

(Visited 1 times, 1 visits today)