ತುಮಕೂರು: ಸ್ವಾತಂತ್ರಪರ‍್ವದಲ್ಲಿಯೇ ಸ್ವಾತಂತ್ರ ಭಾರತ ಹೇಗಿರಬೇಕು ಎಂಬ ಕನಸು ಕಂಡವರು ಅಂಬೇಡ್ಕರ್, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಹಲವು ದೇಶಗಳ ಸಂವಿಧಾನವನ್ನು ಆಧ್ಯಯನ ಮಾಡಿ, ಸಮಾನತೆ, ಭಾತೃತ್ವದ ನೆಲೆಯಲ್ಲಿ ಸಂವಿಧಾನವನ್ನು ರಚಿಸಿ ಎಲ್ಲರೂ ಜಾತಿ, ರ‍್ಮ, ಭಾಷೆ, ಲಿಂಗ ತಾರತಮ್ಯವಿಲ್ಲದೆ ಬದುಕುವಂತಹ ಅವಕಾಶ ಕಲ್ಪಿಸಿದ ಅಂಬೇಡ್ಕರ್ ಇಂದಿನ ಯುವಪೀಳಿಗೆಗೆ ಮಾದರಿ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ವಿವಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಅವರು, ತುಮಕೂರು ವಿವಿಯ ವಿವಿಧ ವಿಭಾಗಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ “ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು “ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಅಂಬೇಡ್ಕರ್ ಅವರನ್ನು ಯುವಜನರು ಓದುವುದರಿಂದ ರ‍್ವ ಜವಾಬ್ದಾರಿಯುತ ಪ್ರಜೆಯಾಗಿ ರೂಪಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಕಡು ಬಡತನ ಕುಟುಂಬದಲ್ಲಿ ಹುಟ್ಟಿದ ಅಂಬೇಡ್ಕರ್ ವಿದ್ಯರ‍್ಥಿ ದಿಸೆಯಲ್ಲಿಯೇ ಆದ ಹಲವು ಅಪಮಾನಗಳನ್ನು ಮೆಟ್ಟಿನಿಂತು ಈ ದೇಶದ ಎಲ್ಲ ಜನರಿಗೆ ಅಗತ್ಯವಾಗಿರುವ ಸಂವಿಧಾನವನ್ನು ರಚಿಸಿಕೊಟ್ಟರು. ಇದರ ಹಿಂದಿನ ಶಕ್ತಿ ಎಂದರೆ ಅವರಲ್ಲಿದ್ದ e್ಞÁನ.ನಿರಂತರವಾಗಿ ಪುಸ್ತಕಗಳನ್ನು ಓದುತ್ತಲೇ, ಅದರಲ್ಲಿ e್ಞÁನವನ್ನು ತನ್ನಾಗಿಸಿಕೊಂಡು, ಬಡವರು, ದೀನದಲಿತರು, ಸಮಾಜದ ಎಲ್ಲ ಸ್ತರದ ಜನರು ಸಮಾನವಾಗಿ ಬದುಕಲು ಬೇಕಾದ ಹಕ್ಕು ಮತ್ತು ರ‍್ತವ್ಯಗಳನ್ನು ಸಂವಿಧಾನದಲ್ಲಿ ನೀಡಿದ್ದಾರೆ. ಅವರು ಲಂಡನ್ನಿನಲ್ಲಿ ಓದುವಾಗ ತಮ್ಮ ಪತ್ನಿ ರಮಾಬಾಯಿ ಅವರಿಗೆ ಪತ್ರದಲ್ಲಿ ನೀಡಿರುವ ಸಂದೇಶ ಇಂದಿಗೂ ಅವಿಸ್ಮರಣಿಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹದೊಂದು ಕರ‍್ಯಕ್ರಮದ ಮೂಲಕ ಯುವಜನರ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರೊ.ವೆಂಕಟೇಶ್ವರಲು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನರ‍್ದೇಶಕ ಕೃಷ್ಣಪ್ಪ ಮಾತನಾಡಿ,ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಕೆಲವೇ ಜಾತಿಗೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇಂತಹ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಉದ್ದೇಶದಿಂದಲೇ ರಾಜ್ಯ ಸರಕಾರ ಇಂತಹ ಕರ‍್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ.ಭಾರತೀಯ ಪ್ರತಿ ಪ್ರಜೆಯ ಹುಟ್ಟಿನಿಂದ ಸಾಯುವವರೆಗೂ ಸಂವಿಧಾನ ಅವನ ಬೆನ್ನಿಗೆ ನಿಲ್ಲುತ್ತದೆ.ಪ್ರತಿ ಮಗುವಿನ ವಿದ್ಯಾಭ್ಯಾಸ, ಉದ್ಯೋಗ,ಘನತೆಯ ಜೀವನ, ಘನತೆಯಿಂದ ಅಂತ್ಯ ಸಂಸ್ಕಾರದ ವರೆಗೂ ಸಂವಿಧಾನದ ವಿವಿಧ ಕಲಂಗಳು ಕೆಲಸ ಮಾಡುತ್ತೇª ಎಂದರು.

(Visited 1 times, 1 visits today)