ತುಮಕೂರು: ಸರಕಾರ ದಲಿತ, ಹಿಂದುಳಿದ ಸಮುದಾಯಗಳ ದಾರ್ಶಾನಿಕರ ಜಯಂತಿಗಳನ್ನು ಆಚರಿಸಲು ಅವಕಾಶ ಕಲ್ಪಿಸಿದೆ. ಆದರೆ ಈ ಎಲ್ಲರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸಲು ಅವಕಾಶ ಕಲ್ಪಿಸಿದರೆ ಹಿಂದುಳಿದ ಸಮುದಾಯಗಳಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಸಹ ಗಮನಹರಿಸಬೇಕಾಗಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ, ಸ್ಪೂರ್ತಿ ಡೆವಲಪ್ರ್ಸ್ನ ಚಿದಾನಂದ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನ ಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಬಲಿಜ ಸಂಘ(ರಿ) ತುಮಕೂರು ಅಯೋಜಿಸಿದ್ದ ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರ ೨೯೯ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ನಾಡಿನ ಸಣ್ಣ ಸಣ್ಣ ಜನಾಂಗಗಳಿಗೆ ಆ ಸಮುದಾಯದ ದಾರ್ಶಾನಿಕರ ಜಯಂತಿಗಳನ್ನು ಸರಕಾರಿ ಕಾರ್ಯಕ್ರಮ ವಾಗಿ ಆಚರಿಸಲು ಅವಕಾಶ ಕಲ್ಪಿಸಿದೆ.ಆದರೆ ಇಂತಹ ದಾರ್ಶಾನಿಕರು ಒಂದು ಸಮುದಾಯಕ್ಕೆ ಮಾತ್ರ ಸಿಮೀತವಾಗಿ, ಮೈಕ್ರೋ ಮೈನಾರಿಟಿ ಸಮುದಾಯಗಳ ನಡುವೆ ಒಗ್ಗಟ್ಟೇ ಇಲ್ಲದಂತಾಗಿದೆ.ಹಾಗಾಗಿ ಎಲ್ಲರ ಜಯಂತಿಗಳು ಒಂದೇ ವೇದಿಕೆಯಲ್ಲಿ ನಡೆದರೆ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆಯಲು ಸಹಕಾರ ಕಲ್ಪಿಸಿದಂತಾಗುತ್ತದೆ ಎಂದರು.
ರಾಜ್ಯದಲ್ಲಿ ಓಬಿಸಿ ಜನಾಂಗ ಸುಮಾರು ಶೇ ೫೫ರಷ್ಟಿದೆ.ಬಲಿಜ ಜನಾಂಗ ಸುಮಾರು ೧೫-೧೮ ಲಕ್ಷ ಜನಸಂಖ್ಯೆಯಿದೆ.ಇಷ್ಟು ಜನಸಂಖ್ಯೆ ಇರುವ ಸಮಾಜದಲ್ಲಿ ಕನಿಷ್ಠ ೬ ಜನ ಶಾಸಕರು, ೨ ಸಂಸದರು ಆಯ್ಕೆಯಾಗಬೇಕಿತ್ತು. ಒಗ್ಗಟ್ಟಿನ ಕೊರತೆಯಿಂದ ಇದು ಸಾಧ್ಯವಾಗಿಲ್ಲ.ವಯುಕ್ತಿಕ ಪ್ರತಿಷ್ಠೆಗಳನ್ನು ಬಿಟ್ಟು ನಾವೆಲ್ಲರೂ ಒಗ್ಗೂಡಿದರೆ ಎಲ್ಲಾ ರಂಗದಲ್ಲಿಯೂ ಬೆಳೆಯಲು ಅವಕಾಶವಿದೆ.ಶ್ರೀಯೋಗಿ ನಾರೇಯಣ ಯತೀಂದ್ರರ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುನ್ನೆಡೆಯಬೇಕಾಗಿದೆ ಎಂದು ಚಿದಾನಂದ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಲಿಜ ಸಂಘ(ರಿ)ದ ಜಿಲ್ಲಾಧ್ಯಕ್ಷ ಟಿ.ಆರ್.ಅಂಜನಪ್ಪ, ಸಮ ಸಮಾಜದ ಕನಸು ನನಸಾ ಗಬೇಕೆಂದರೆ ಅದು ಕಾಲಜ್ಞಾನಿ ಯೋಗಿ ನಾರೇ ಯಣ ಯತೀಂದ್ರರAತಹ ಅನೇಕರ ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ.ಸಮ ಸಮಾಜ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ. ವಿದ್ಯೆ ಇಲ್ಲದೆ ಸುಧಾರಣೆ ಎಂಬುದು ಮರಿಚೀಕೆ.ಹಾಗಾಗಿ ವಿದ್ಯೆಯ ಕಡೆಗೆ ನಾವೆಲ್ಲರೂ ಗಮನಹರಿಸಬೇಕಾಗಿದೆ.ಈ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಪ್ರಥಮವಾಗಿ ಶಾಲೆ ತೆರೆದ ಸಾವಿತ್ರಿ ಬಾಯಿ ಪುಲೆ ನಮ್ಮ ಸಮುದಾಯದವರು.ಇಂದು ಶೇ ೫೦ಕ್ಕಿಂತಲೂ ಹೆಚ್ಚಿರುವ ಮಹಿಳಾ ನೌಕರರ ರೂವಾರಿ ಸಾವಿತ್ರಿ ಬಾಯಿ ಪುಲೆ ಅವರನ್ನು ಮರೆಯುವಂತಿಲ್ಲ. ರಾಜ್ಯದ ಮಟ್ಟಿಗೆ ಸಮುದಾಯ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಮತ್ತು ಎಂ.ಎಸ್.ರಾಮಯ್ಯ ಕುಟುಂಬದವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಕಷ್ಟ ಕಾಲದಲ್ಲಿ ಸಮುದಾಯವನ್ನು ಕೈಹಿಡಿದು ನಡೆಸಿದ್ದಾರೆ.ಸರಕಾರ ಬಲಿಜ ಸಮಾಜವನ್ನು ೨ಎ ಜಾತಿ ಪಟ್ಟಿಗೆ ಸೇರಿಸಿ ಶಿಕ್ಷಣಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ಉದ್ಯೋಗ ದಲ್ಲಿಯೂ ಇದೇ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರರ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲರಾದ ಹೆಚ್. ಬಿ .ಪ್ರಕಾಶ್,೧೧೧ ವರ್ಷಗಳ ಕಾಲ ಬದುಕಿದ್ದ ನಾರೇಯಣ ಯತೀಂದ್ರರು ನುಡಿದ ಅನೇಕ ಕಾಲಜ್ಞಾನಿ ಭವಿಷ್ಯಗಳು ಇಂದಿಗೂ ನಿಜವಾಗಿವೆ.ನಿಜವಾಗುತ್ತಲಿವೆ.ದೈವತ್ವದ ಜೊತೆಗೆ, ಮಾನವತ್ವದ ಕಡೆಗೆ ಸದಾ ತುಡಿಯುತಿದ್ದ ಯತೀಂದ್ರರು, ಲೌಕಿಕ ಸುಖಃವನ್ನು ತೇಜಿಸಿ, ಅಧ್ಯಾತ್ಮದ ಕಡೆಗೆ ನಡೆದವರು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾಕರಾದ ಸುರೇಶ್, ಬಲಿಜ ಸೇವಾ ಸಂಘ ಅಧ್ಯಕ್ಷ ಹೆಚ್.ಶಿವಕುಮಾರ್ ಅವರುಗಳು ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತಿ ಕುರಿತು ಮಾತನಾಡಿದರು. ಜಿಲ್ಲಾ ಬಲಿಜ ಸಂಘದ ಜಂಟಿ ಕಾರ್ಯದರ್ಶಿ ಜಯಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷ ಗೀತಮ್ಮ,ಉಪಾಧ್ಯಕ್ಷರಾದ ಗಣೇಶ್, ಕಾರ್ಯದರ್ಶಿ ಟಿ.ಆರ್.ಹೆಚ್. ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(Visited 1 times, 1 visits today)