ತುಮಕೂರು: ಭಗವಾನ್ ಮಹಾವೀರರು ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವದಾದ್ಯಂತ ತಮ್ಮ ಅಹಿಂಸಾ ತತ್ವದ ಮೂಲಕ ಹೆಸರುವಾಸಿಯಾದ ಸಂತರಾಗಿದ್ದಾರೆ. ಅವರ ಮಾನವನ ಬದುಕಿಗೆ ಬೇಕಾದಐದು ತತ್ವಗಳನ್ನು ಹೇಳಿದ್ದು, ಅವುಗಳನ್ನು ಜನರು ಅಳವಡಿಸಿಕೊಂಡರೆ ಇಡೀ ವಿಶ್ವವೇ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತುಮಕೂರು ತಹಶೀಲ್ದಾರ್ ರಾಜೇಶ್ವರಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಸಭಾಂ ಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಸಾಪ ಹಾಗೂ ಶ್ವೇತಾಂಬರ ಮತ್ತು ದಿಗಂಬರ್ಜೈನ ಸಮಾಜದ ವತಿಯಿಂದ ಆಯೋಜಿಸಿದ್ದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದಅವರು, ಬೋಗ,ಲಾಲಸ ಜೀವನದಿಂದ ಹೊರಬರಲು ಸತ್ಯ, ಅಹಿಂಸೆ, ಬ್ರಹ್ಮಚರ್ಯ ಸೇರಿದಂತೆಐದು ಪ್ರಮುಖ ಅಂಶಗಳನ್ನು ಮಹಾವೀರರು ಗುರುತಿಸಿ, ಅನುಸರಿಸಿದ್ದಾರೆ. ಅವುಗಳನ್ನು ಪಾಲನೆ ಮಾಡುವ ಮೂಲಕ ನಾವುಗಳು ಕೂಡ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಜಯಂತಿಗೂ ಒಂದು ಅರ್ಥ ಬರುತ್ತದೆ ಎಂದರು.
ಹಿರಿಯ ಸಾಹಿತಿ ಡಾ. ಪದ್ಮಪ್ರಸಾದ್ ಮಾತನಾಡಿ, ಕ್ರಿಸ್ತಪೂರ್ವ ೫೯೯ರಲ್ಲಿ ಜನಿಸಿ ದ ಮಹಾವೀರರು ಜೈನ ಧರ್ಮದ ೨೪ ನೇ ತೀರ್ಥಂಕರರು, ಸತ್ತ, ಅಹಿಂಸೆ, ಅಪಗ್ರ ಹ, ಬ್ರಹ್ಮಚರ್ಯ, ಆಸ್ತೆಯ ಎಂಬ ಐದು ತತ್ವಗಳನ್ನು ನೀಡಿದ್ದಾರೆ. ಇನ್ನೊಬ್ಬರನ್ನು ನೋಯಿಸಿ ದುಡಿಯುವ ಹಣ ಎಂದಿಗೂ ಒಪ್ಪುವಂ ತಹದ್ದಲ್ಲ. ಸುಳ್ಳು, ಕಳ್ಳತನಕ್ಕೆ ಅವಕಾಶವಿಲ್ಲದೆ, ಸರಿಯಾದದಾರಿಯಲ್ಲಿ, ಅಗತ್ಯಕ್ಕೆ ತಕ್ಕಷ್ಟೇ ಸಂಪತ್ತು ಸಂಗ್ರಹವೇ ನಿಮ್ಮ ನೆಮ್ಮದಿಯ ಜೀವನಕ್ಕೆ ದಾರಿ, ನೀನು ಬದುಕು, ಇತರರನ್ನು ಬದುಕಲು ಬೀಡು ಎಂಬ ತತ್ವದ ಮೂಲಕ ಸಕಲರಿಗೂ ಲೇಸನ್ನೇ ಬಯಸಿದ ಮಹಾವೀರರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಹಿಂಸೆಯನ್ನು ತ್ಯೇಜಿಸುವುದರಿಂದ ನೆಮ್ಮದಿಯ ಜೀವನ ಸಾಧ್ಯ ಎಂಬುದನ್ನು ಅಹಿಂಸೋ ಪರಮಧರ್ಮಃ ಎಂಬ ತತ್ವದ ಮೂಲಕ ಮಹಾವೀರರು ತೋರಿಸಿಕೊಟ್ಟಿದ್ದಾರೆ. ತಾವು ಹೇಳಿದಂತೆ ನಡೆದು ತೋರಿಸಿದ್ದಾರೆ. ಇಂದಿನ ಪ್ರಕ್ಷಬ್ದಜೀವನಕ್ಕೆ ಮಹಾವೀರರ ತತ್ವಗಳು ಮದ್ದಾಗಿವೆಎಂದರು.
ಜೈನ ಮುನಿ ಶ್ರೀಶ್ರೀಭಾನುರತ್ನ ವಿಜಯ ಜೀ ಮಾತನಾಡಿ, ನೆಮ್ಮದಿ ಮತ್ತು ಶಾಂತಿಯ ಜೀವನಕ್ಕೆ ಅಗತ್ಯವಿರುವ ಐದು ಸೂತ್ರಗಳನ್ನು ಮಹಾವೀರರು ನೀಡಿದ್ದಾರೆ.ಅವುಗಳನ್ನು ನಾವು ಪಾಲಿಸಿದರೆ ಇಡೀ ವಿಶ್ವವೇ ಶಾಂತಿ, ನೆಮ್ಮ ದಿಯಿಂದ ಬದುಕಲು ಸಾಧ್ಯಎಂದರು.
ಕಾರ್ಯಕ್ರಮದಲ್ಲಿ ಜೈನ ಮುನಿ ಶ್ರೀಹರ್ಷ ರತ್ನ ವಿಜಯಜೀ, ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸುರೇಶ ಕುಮಾರ್, ಚಿಕ್ಕಪೇಟೆ ಜೀನ ಮಂದಿ ರದ ಮುಖ್ಯಸ್ಥರಾದ ಬಾಹುಬಲಿ ಬಾಬು, ಕಾರ್ಯದರ್ಶಿ. ಎಂ.ನಾಗರಾಜು, ಖಜಾಂಚಿ ಸುಬೋದ್ ಕುಮಾರ್ಜೈನ್, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ಉತ್ತಮ ಜೈನ್, ಸಮಾಜದ ಮುಖಂಡರಾದ ಸುರೇಂದ್ರಷಾ, ಶುಬೋದ್ ಕುಮಾರ್, ವಿನ ಯಜೈನ್,ಎಸ್.ಎಂ.ಅಜಿತ್ಕುಮಾರ್, ತೀ ರ್ಥಕುಮಾರ್ಡಾ.ಲಕ್ಷö್ಮಣದಾಸ್, ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಹಾವೀರರಜಯಂತಿ ಅಂಗವಾಗಿ ನಗರದ ಎಂ.ಜಿ.ರಸ್ತೆಯಿAದ, ಶೀರಾಗೇಟ್ ನ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಶ್ವೇ ತಾಂಬರರು,ಚಿಕ್ಕಪೇಟೆಯಿAದ ಬಿ.ಹೆಚ್.ರಸ್ತೆಯಜೈನಭವನದವರೆಗೆ ದಿಗಂಬರ್ ಸಮು ದಾಯದಜನರು ಮಹಾವೀರರ ಮೆರವಣಿಗೆ ನಡೆಸಿದರು. ಎರಡು ಮೆರವಣಿಗೆಗಳು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಂದಿಸಿ, ಪರಸ್ವರ ಶುಭಾಷಯ ವಿನಿಮಯ ಮಾಡಿಕೊಂಡರು.