Author: News Desk Benkiyabale

ಪಾವಗಡ: ತೆಲಂಗಾಣ ವಿಧಾನಸಭೆಯಲ್ಲಿ ಒಳಮೀಸ ಲಾತಿ ವರ್ಗೀಕರಣ ಸಂಬAಧಿತ ವರದಿ ಅಂಗೀಕಾರಗೊAಡಿರುವ ಹಿನ್ನೆಲೆಯಲ್ಲಿ, ಪಾವ ಗಡ ತಾಲ್ಲೂಕಿನ ದಲಿತ ಪರ ಸಂಘಟನೆಗಳ ಮುಖಂಡರು ಈ ನಿರ್ಧಾರವನ್ನು ಶ್ಲಾಘಿಸಿ ಹರ್ಷೋದ್ಗಾರವನ್ನು ಬುಧವಾರ ಸಂಜೆ ೪ ಗಂಟೆಯಲ್ಲಿ ವ್ಯಕ್ತಪಡಿಸಿದರು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಂಃಅಆ ವರ್ಗೀಕರಣ ಜಾರಿಗೊಳಿಸುವ ಶಾಸನವನ್ನು ಮಂಡಿಸಿ ಅದನ್ನು ಅಂಗೀಕರಿಸುವಲ್ಲಿ ಮಹತ್ವದ ಪಾತ್ರವಹಿಸಿದ ಕಾರಣ, ಪಾವಗಡ ತಾಲ್ಲೂಕಿನ ದಲಿತ ಮುಖಂಡರು ಹಾಗೂ ನಾಯಕರು ಹಾಲಿನ ಅಭಿಷೇಕ ನಡೆಸಿ ಹರ್ಷವನ್ನು ಹಂಚಿಕೊAಡರು. ಈ ಕಾರ್ಯಕ್ರಮದಲ್ಲಿ ಮಾದಿಗ ಮೀಸಲಾತಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಮಂದ ಕೃಷ್ಣ ಮಾದಿಗ ಅವರಿಗೂ ಹಾಲಿನ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಟಿ.ಎನ್.ಪೇಟೆ ರಮೇಶ್, ಕೋರ್ಟ್ ನರ ಸಪ್ಪ, ವಳ್ಳೂರು ನಾಗೇಶ್, ಎನ್.ರಾಮಾಂ ಜಿನಪ್ಪ, ಮಂಜುನಾಥ್ ಮಂಗಳವಾಡ, ಕೆ.ಪಿ. ಲಿಂಗಣ್ಣ, ಮೀನಕುಂಟನಹಳ್ಳಿ ನರಸಿಂಹಪ್ಪ, ಶಿವಶಂಕರ, ನರಸಿಂಹ, ದೇವಲಕೆರೆ ಹನುಮಂತರಾಯ, ಭೀಮನಕುಂಟೆ ರಾಮಾಂ ಜಿನಪ್ಪ, ರವಿ, ನಾರಾಯಣಪ್ಪ, ಬಂಗಾರಪ್ಪ ಭಾಗವಹಿಸಿದ್ದರು…

Read More

ತುಮಕೂರು: ರಾಜಕಾರಣಿಗಳ,ಮುಖಂಡರ ಒತ್ತಡಕ್ಕೆ ಮಣಿದು ವಿಶ್ವವಿದ್ಯಾಲಯಗಳಲ್ಲಿ ಆರಂಭವಾಗುವ ಮಹನೀಯ ರ ಅಧ್ಯಯನ ಪೀಠಗಳು ಅನುದಾನದ ಕೊರತೆಯಿಂದ ಅಧ್ಯಯನ ಪೀಠಗಳಾಗದೆ, ಬಡ್ಡಿ ಪೀಠಗಳಾಗಿ ಬದಲಾಗುತ್ತಿರು ವುದು ವಿಷಾದದ ಸಂಗತಿಗಳಾಗಿವೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ. ನಗರದ ಕನ್ನಡ ಭವನದಲ್ಲಿ ಶೈನಾ ಅಧ್ಯಯನ ಸಂಸ್ಥೆ, ಜಿಲ್ಲಾ ಕಸಾಪ, ಡಮರುಗ ರಂಗ ಸಂಪನ್ಮೂಲ ಕೇಂದ್ರ ವತಿಯಿಂದ ಡಾ.ಬಿ.ಸಿ.ಶೈಲಾನಾಗರಾಜು ರಚಿಸಿರುವ ನೀಲಾಂಬಿಕೆ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗುವ ಅಧ್ಯಯನ ಪೀಠಗಳಿಗೆ ಕನಿಷ್ಠ ಸರಕಾರ ೨ ಕೋಟಿ ರೂ ಇಡಿಗಂಟು ನೀಡುವಂತಾದರೆ,ಅದರಿAದ ಬರುವ ಅದಾಯದಲ್ಲಿ ಒಂದಷ್ಟು ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಇಲ್ಲವೆಂದರೆ ಹೆಸರಿಗಷ್ಟೇ ಅಧ್ಯಯನ ಕೇಂದ್ರವಾಗಿ,ಉಪಯೋಗಕ್ಕೆ ಬಾರದಂತಾಗುತ್ತೇವೆ.ಸರಕಾರಗಳು ನೈತಿಕವಾಗಿ, ಅರ್ಥಿಕವಾಗಿ ವಿವಿಗಳನ್ನು ಬಲಪಡಿಸಬೇಕಾಗಿದೆ ಎಂದರು. ಮೈಸೂರು ವಿವಿಯ ಬಸವ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಅಜ್ಞಾತದಲ್ಲಿದ್ದ ಅನೇಕ ವಚನಕಾರ್ತಿಯರನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ವಚನ ಚಿಂತನಮಾಲೆ ಎಂಬ ಹೆಸರಿನಲ್ಲಿ ಸುಮಾರು ೩೧ ಪುಸ್ತಕಗಳನ್ನು ಹೊರತಂದಿದ್ದು,ಅದರಲ್ಲಿ ಡಾ.ಬಿ.ಸಿ.ಶೈಲಾ ನಾಗರಾಜು ಬರೆದಿರುವ ನೀಲಾಂಬಿಕೆಯೂ ಒಂದು.ಅದು…

Read More

ಹುಳಿಯಾರು: ಈ ಆಸ್ಪತ್ರೆಗೆ ಕಾಯಂ ವೈದ್ಯರಿಲ್ಲ. ನಿಯೋಜನೆಗೊಂಡಿರುವ ವೈದ್ಯರೂ ನಿತ್ಯ ಬರೋದಿಲ್ಲ. ಪರಿಣಾಮ ಹತ್ತಾರು ಹಳ್ಳಿಗಳ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಅಗತ್ಯ ಮೂಲ ಸೌಕರ್ಯದ ಕೊರತೆಯಿಂದ ಆಸ್ಪತ್ರೆ ಭಣಗುಡುತ್ತಿದೆ. ಒಟ್ಟಾರೆ ಇಲ್ಲೊಂದು ಆಸ್ಪತ್ರೆ ಇದೆ ಎನ್ನುವುದನ್ನೇ ಜನ ಮರೆಯುವಂತಾಗಿದೆ. ಹಳ್ಳಿ ಜನರಿಗೆ ತರ್ತು ಹಾಗೂ ಗುಣ ಮಟ್ಟದ ಚಿಕಿತ್ಸೆ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿಯಿದು. ರಾಷ್ಟಿçÃಯ ಹೆದ್ದಾರಿ ೨೩೪ ಹಾದು ಹೋಗುವ ಮಾರ್ಗದಲ್ಲಿ ಈ ಗ್ರಾಮ ಬರುವುದರಿಂದ ಇಲ್ಲಿನ ಆರೋಗ್ಯ ಕೇಂದ್ರ ಮಹತ್ವದಾಗಿದೆ. ಆದರೆ ಇಲ್ಲಿನ ಆಸ್ಪತ್ರೆಗೆ ಚಿಕಿತ್ಸೆ ಕೊಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಯಂ ವೈದ್ಯರಿಲ್ಲದ ಕಾರಣದಿಂದ ಈ ಆಸ್ಪತ್ರೆಗೆ ದಸೂಡಿ ಆಸ್ಪತ್ರೆಯ ಡಾ.ಜುಬೇದ್ ಅವರನ್ನು ೪ ದಿನಗಳು ಹಾಗೂ ಗೋಡೆಕೆರೆಯ ಡಾ.ಶಂಕರ್ ಅವರನ್ನು ವಾರದಲ್ಲಿ ೨ ದಿನಗಳ ಕಾಲ ಡೆಪ್ಯೂಟೇಷನ್ ಮಾಡಲಾಗಿದೆ. ಆದರೆ ಇವರಿಬ್ಬರೂ ಯಾವಾಗ ಬಂದೋಗುತ್ತಾರೋ ತಿಳಿಯದಾಗಿದೆ. ಅಕಸ್ಮಾತ್ ಬಂದರೂ ಬೆಳಗ್ಗೆಯಿಂದ ಸಂಜೆಯವರೆಗೆ ಆಸ್ಪತ್ರೆಯಲ್ಲಿ ಇರುವುದಿಲ್ಲ.…

Read More

ತುಮಕೂರು: ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯು ಇದೇ ಮಾರ್ಚ್ ೨೧ ರಿಂದ ಏಪ್ರಿಲ್ ೪ರವರೆಗೆ ನಡೆಯಲಿದ್ದು, ಪರೀಕ್ಷೆಯು ಯಾವ ಲೋಪದೋಷವಿಲ್ಲದೆ ಸುಸೂತ್ರವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ೩೫,೬೩೬ ವಿದ್ಯಾರ್ಥಿಗಳು ನೋಂದಾಯಿಸಿಕೊAಡಿದ್ದು, ಈ ಪೈಕಿ ತುಮ ಕೂರು(ದ) ಶೈಕ್ಷಣಿಕ ಜಿಲ್ಲೆಯಿಂದ ೧೨,೨೨೭ ವಿದ್ಯಾರ್ಥಿಗಳು, ೧೦,೨೪೬ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೨೨,೪೭೩ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ೬,೮೯೭ ವಿದ್ಯಾರ್ಥಿಗಳು, ೬,೨೬೬ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೧೩,೧೬೩ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾ ಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ತುಮಕೂರು(ದ) ೮೦ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ೪೯ ಸೇರಿ ಒಟ್ಟು ೧೨೯ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವ ಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು ಮಾರ್ಗಗಳನ್ನು ರಚಿಸಲಾಗಿದ್ದು, ಸೂಕ್ತ ಭದ್ರತೆಯೊಂದಿಗೆ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು ಕ್ರಮವಹಿಸಲಾಗಿದೆ.ಜಿಲ್ಲಾ ಹಂತದಲ್ಲಿ…

Read More

ತುಮಕೂರು: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಈ ಸಂಘವು ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆ ಮಾಡಿದ್ದು ಜಿಲ್ಲಾ ಅಧ್ಯಕ್ಷರ ನೇಮಕ ಮಾಡ ಲಾಗಿದೆ. ಪ್ರತೀ ವರ್ಷ ಕನ್ನಡ ನುಡಿ ವೈಭವ ಕಾರ್ಯಕ್ರಮ ಜೊತೆಗೆ ಹಲವಾರು ವಿಶೇಷ ವಿನೂತನ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಕನ್ನಡ ನಾಡು ನುಡಿ ಸೇವೆ ಮಾಡುತ್ತಾ ಬಂದಿದೆ. ಮಾರ್ಚ್ ೧೬ ರಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬರಹ ಗಾರರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಕವಿಗಳು ಹಾಗೂ ಸಾಹಿತಿಗಳಾದ ಶ್ರೀ ಹನುಮಂತೋಜಿರಾವ್ ರವರಿಗೆ ಕನ್ನಡ “ಸಾಹಿತ್ಯ ಸೇವಾ ರತ್ನ” ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಜೊತೆಗೆ ಐದು ಕೃತಿಗಳ ಲೋಕಾರ್ಪಣೆಯನ್ನು ರಾಜ್ಯಧ್ಯಕ್ಷ ಮಧು ನಾಯ್ಕ ಲಂಬಾಣಿ ಮಾಡಿದರು. ಕಾರ್ಯ ಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಹಿರಿ ಯ ಸಾಹಿತಿ ಡಾಕ್ಟರ್ ಹಸೀನರವರು ಕವಿತೆ ವಾಚಿಸುವ ಮುಖೇನ ನೆರವೇರಿಸಿದರು. ಕಾರ್ಯಕ್ರಮದ…

Read More

ತುಮಕೂರು: ಪ್ರತಿಯೊಬ್ಬ ಗ್ರಾಹಕನು ತಾನು ಖರೀದಿಸಿದ ವಸ್ತು ಹಾಗೂ ಪಡೆದ ಸೇವೆಯಲ್ಲಿ ನ್ಯೂನ್ಯತೆ/ಕೊರತೆಗಳು ಕಂಡು ಬಂದರೆ ಪ್ರಶ್ನಿಸುವ ಹಕ್ಕನ್ನು ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಜಿ.ಟಿ. ವಿಜಯಲಕ್ಷಿö್ಮ ಕರೆ ನೀಡಿದರು. ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತç ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ವಿದ್ಯೋದಯ ಕಾನೂನು ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರು ಯಾವುದೇ ಸಾಮಗ್ರಿ ಖರೀದಿಸಿದಲ್ಲಿ ಕಡ್ಡಾಯವಾಗಿ ವ್ಯಾಪಾರಸ್ಥರಿಂದ ರಸೀದಿ ಪಡೆಯಬೇಕು. ಸಾಮಗ್ರಿ ಕೊಳ್ಳುವ ಮುನ್ನ ನಿವ್ವಳ ತೂಕ, ಅಳತೆ, ತಯಾರಾದ ತಿಂಗಳು ಮತ್ತು ವರ್ಷ, ಗರಿಷ್ಠ ಮಾರಾಟ ಬೆಲೆ(ಎಂಆರ್‌ಪಿ), ತಯಾರಕರ ಹೆಸರು, ಮತ್ತಿತರ ಮಾಹಿತಿಯನ್ನು ಗ್ರಾಹಕ ಹೊಂದಿರಬೇಕು. ಎಂ ಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವ್ಯಾಪಾರಸ್ಥರನ್ನು ಪ್ರಶ್ನಿಸುವ ಹಕ್ಕು ಗ್ರಾಹನಿಗಿರುತ್ತದೆ ಎಂದು ತಿಳಿಸಿದರು. ಗ್ರಾಹಕ ಕಾಯ್ದೆಯನ್ವಯ ಯಾವುದೇ ವ್ಯಾಪಾರ/ವ್ಯವಹಾರಗಳನ್ನು…

Read More

ಚಿಕ್ಕನಾಯಕನಹಳ್ಳಿ: ಪ್ರಜಾಪ್ರಭುತ್ವದ ವ್ಯೆವಸ್ಥೆಯಲ್ಲಿ ಅಭಿವೃದ್ಧಿಗೆ ಯಾವಾಗಲು ವಿರೋಧವಾಗಿಯೇ ಇರುತ್ತದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಸ್ವಂತಿಕೆ ಚಿಂತನೆಯನ್ನ ಬಿಟ್ಟಾಗ ತಾಲ್ಲೂಕಿನ ಕ್ಷೇತ್ರ ವನ್ನ ಉನ್ನತ ಮಟ್ಟಕ್ಕೆ ಕೊಂಡೊಯಲು ಸಾದ್ಯವಾಗುತ್ತದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಪಟ್ಟಣದ ನಂಧಿನಿ ಭವನದಲ್ಲಿ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘದ ಕಾರ್ಯ ದರ್ಶಿಗಳಿಂದ ಹಾಗು ಸಿಬ್ಬಂದಿಯಿAದ ತುಮು ಲ್ ನಿರ್ದೇಶಕ ಬಿ.ಎಸ್.ಶಿವಪ್ರಕಾಶ್ ರವರ ಅಭಿನಂಧನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುಣಾವಣೆಯಲ್ಲಿ ಗೆದ್ದಾಗ ಮೊದಲು ಅಭಿವೃದ್ದಿಗೆ ಆದ್ಯತೆ ನೀಡಬೇಕು. ವ್ಯೆಕ್ತಿಗಳ ಕೆಲಸಕ್ಕೆ ಹೆಚ್ಚು ಒತ್ತು ನೀಡಿದರೆ ಸಾಮಾಜಿಕ ಹಿತಾಸಕ್ತಿಗೆ ಭಂಗ ಉಂಟಾಗುತ್ತದೆ. ಸಮಾಜದಲ್ಲಿ ಅಗತ್ಯ ಇರುವ ಅಭಿವೃದ್ಧಿ ಗೆ ಚಿಂತನೆ ನೆಡೆಸಿ ಕೆಲಸಮಾಡಲು ಹೋದಾಗ ಜನರು ಬೆಂಬಲಕೊಡುತ್ತಾರೆ ಆದರೆ ಒಂದಿಬ್ಬರು ತರ್ಲೆ ಮಾಡಿದಾಗ ಕೆಲಸಗಳು ನೆನೆಗುದಿಗೆ ಬೀಳುತ್ತದೆ. ಡಿಂಕನಹಳ್ಳಿ ಪ್ರದೇಶದ ೪೦ಎಕರೆ ಜಾಗದಲ್ಲಿ ಸುಮಾರು ೪೦೦ಕ್ಕೂ ಹೆಚ್ಚಿನ ವೆಚ್ಚದಲ್ಲಿ ೪೦೦ಕೆವಿ ಸಾಮರ್ಥ್ಯ ಉಳ್ಳ ಬೃಹತ್ ವಿದ್ಯುತ್ ಘಟಕವನ್ನ ನಿರ್ಮಿಸಲು ಮುಂದಾಗಿತ್ತು. ಇದರ ಜೋತೆಗೆ ೨೨೦ಕೆವಿಯನ್ನ ಅಳವಡಿಸಲಾಗುತ್ತಿತ್ತು. ನಾನು…

Read More

ತುರುವೇಕೆರೆ: ಸಮುದಾಯ ಭವನಗಳು ಗ್ರಾಮದ ಆಸ್ತಿಯಾಗಿದ್ದು ಅದರ ಉತ್ತಮ ನಿರ್ವಹಣೆ ಗ್ರಾಮಸ್ಥರ ಹೊಣೆಗಾರಿಕೆಯಾಗಬೇಕು ಆಗ ಮಾತ್ರ ಗ್ರಾಮದಲ್ಲಿ ಅಭಿವೃದ್ಧಿಯ ಬೆಳಕು ಚೆಲ್ಲಲು ಸಾದ್ಯ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಅಭಿಪ್ರಾಯ ಪಟ್ಟರು. ತಾಲೂಕಿನ ದಬ್ಬೇಗಟ್ಟ ಹೋಬಳಿಯ ದೇವರ ಮಾವಿನಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಲಕ್ಷ್ಮಿದೇವಿ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ದಿಂದ ಮಂಜು ರಾಧ ಅನುದಾನ ಮೊತ್ತ ೨,೫೦,೦೦೦ ರೂಗಳನ್ನು ಸಮಿತಿಯರಿಗೆ ವಿತರಿಸಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮದ ಸರ್ವಾಂಗಿನ ಅಭಿವೃದ್ಧಿಗಾಗಿ ಗ್ರಾಮದಲ್ಲಿರುವ ದೇವಸ್ಥಾನಗಳ ಜೀರ್ಣೋದ್ಧಾರ, ಹಾಲು ಕಟ್ಟಡಗಳ ರಚನೆಗೆ ಪ್ರೋತ್ಸಾಹ, ಕುಡಿವ ನೀರು ಘಟಕಗಳ ಅಭಿವೃದ್ಧಿ, ಶಾಲಾ ಕಾಲೇಜುಗಳಿಗೆ ಪ್ರೋತ್ಸಾಹ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಿಗೆ ಅನುದಾನಗಳನ್ನು ನೀಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಇದರ ನಿರ್ವಹಣೆಯ ಜವಾಬ್ದಾರಿಯು ಅಷ್ಟೇ ಮುಖ್ಯ ವಾಗಿರುತ್ತದೆ. ಗ್ರಾಮಸ್ಥರೆಲ್ಲರೂ ಅದರ ಉತ್ತಮ ನಿರ್ವಹಣೆಯ ಹೊಣೆ ಹೊತ್ತರೆ ಮಾತ್ರ ಅದು ಗ್ರಾಮದ ಆಸ್ತಿ ಆಗಬಹುದೇ…

Read More

ತುಮಕೂರು: ಗ್ರಾಮ ಸರಕಾರವೆಂದು ಕರೆಯುವ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಮಹಿಳಾ ಸದಸ್ಯರ ಪತಿಯರದೇ ದರ್ಬಾರು ಹೆಚ್ಚಾಗಿದ್ದು, ತಾವು ಕಳಪೆ ಕಾಮಗಾರಿ ನಡೆಸಿ,ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ(ಪಿಡಿಓ)ಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ(ರಿ) ರಾಜ್ಯಾಧ್ಯಕ್ಷ ಕೆ.ಹೆಚ್.ಶಿವಕುಮಾರ್(ಬಂಡೆಕುಮಾರ್) ಜಿ.ಪಂ.ಸಿಇಓ ಪ್ರಭು ಮತ್ತು ತಾ.ಪಂ.ಇಓ ಹರ್ಷಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲೆಯ ಹಲವು ಗ್ರಾಮಪಂ ಚಾಯಿತಿಗಳಲ್ಲಿ ಮಹಿಳಾ ಸದಸ್ಯರ ಹೆಸರಿನಲ್ಲಿ ಅವರ ಗಂಡAದಿರುವ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಲ್ಲದೆ,ಇಲ್ಲ, ಸಲ್ಲದ ಆರೋಪ ಮಾಡಿ ಅಮಾನತ್ತು ಮಾಡಿಸುವ ಬೆದರಿಕೆ ಹಾಕಿ ಕಳಪೆ ಕಾಮಗಾರಿಗಳ ಬಿಲ್ ಪಾವತಿಸಲು ಪಿಡಿ ಓಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ.ಇಂತಹ ಪ್ರಕರಣಗಳು ಆಗಿಂದಾಗ್ಗೆ ಹೆಚ್ಚುತ್ತಿವೆ. ಗ್ರಾ.ಪಂ. ಸದಸ್ಯರ ಕುಟುಂಬದವರು ಗುತ್ತಿಗೆ ಕಾಮಗಾರಿ ನಡೆಸುವಂತಿಲ್ಲ ಎಂಬ ನಿಯಮವಿದ್ದರೂ ಬೇನಾಮಿ ಹೆಸರಿನಲ್ಲಿ ಗ್ರಾಪಂ ವ್ಯಾಪ್ತಿಯ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಿ, ಅವು ಕಳಪೆ ಎಂದು ಕಂಡು ಬಂದರೂ ಬಿಲ್ ಪಾವತಿಸಲು ಒತ್ತಡ ತರಲಾಗುತ್ತಿದೆ.ಒಂದು ವೇಳೆ ಕಳಪೆ ಕಾಮಗಾರಿಗಳ ಬಗ್ಗೆ…

Read More

ತುರುವೇಕೆರೆ: ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸುತ್ತಿರುವ ರಾಗಿ ಹಣವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಟ್ಟಣದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷ ಧನಂಜಯಾರಾದ್ಯ ಮಾತನಾಡಿ ಜಿಲ್ಲೇಯಲ್ಲಿ ಎಲ್ಲಾ ರಾಗಿ ಖರೀದಿ ಕೇಂದ್ರಗಳಲ್ಲಿ ಮಾ.೩ ರಿಂದ ರಾಗಿ ಖರೀದಿಸುತ್ತಿದೆ. ಈಗಾಗಲೇ ಸಾವಿರಾರು ಕ್ವಿಂಟಾಲ್ ರಾಗಿಯನ್ನು ರೈತರಿಂದ ಖರೀದಿಸಿದ್ದು ಇದುವರೆವಿಗೂ ರಾಗಿ ಹಣವನ್ನು ರೈತರ ಖಾತೆಗೆ ಜಮಾ ಮಾಡಿರುವುದಿಲ್ಲ. ರೈತರು ಆರ್ಥಿಕವಾಗಿ ತೊಂದರಯಲ್ಲಿದ್ದು ಜೀವನ ನಿರ್ವಹಣೆಗೆ ಆ ಹಣವನ್ನೇ ಅವಲಂಬಿಸಿದ್ದಾರೆ. ಬ್ಯಾಂಕುಗಳು ಮತ್ತು ಖಾಸಗಿಯವರಿಂದ ಸಾಲ ಮಾಡಿದ್ದು ಮಾನಸಿಕವಾಗಿ ನೋವು ಅನುಭವಿಸುತ್ತಿದ್ದಾನೆ. ಆದುದರಿಂದ ರೈತರ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಆಯಾ ದಿನವೇ ಸರ್ಕಾರ ರೈತರ ಖಾತೆಗಳಿಗೆ ಹಣ ಜಮಾ ಮಾಡಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲೆಯ ತುರುವೇಕೆರೆ ಹಾಗೂ ಕೊರಟಗೆರೆ ತಾಲ್ಲೂಕುಗಳಲ್ಲಿ ಕ್ರಷರ್ ಗಣಿಗಾರಿಕೆ ನಡೆಯುತ್ತಿದ್ದು ಇದರ ಬಗ್ಗೆ ಹಲವಾರು…

Read More