ಪಾವಗಡ


ಪಟ್ಟಣದ ಅಗಸರಕುಂಟೆ ಕೆರೆಯನ್ನು ವೀಕ್ಷಿಸಲು ಹೋಗಿ ಕಾಲು ಜಾರಿ ಬಿದ್ದು ೧೪ ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಪಟ್ಟಣದ ವಾಸಿ ರಮೇಶ್ ಮತ್ತು ಅಪರ್ಣಾ ದಂಪತಿಯ ಮಗ ಉಜ್ವಲ (೧೪) ಮೃತಪಟ್ಟ ದುದೈವಿಯಾಗಿದ್ದಾನೆ.
ಆಟ ಆಡಲು ಹೋಗಿದ್ದಾರೆ ಎಂದು ತಿಳಿದ ಪೋಷಕರು ಮಕ್ಕಳು ಮನೆಗೆ ಬಾರದ ಕಾರಣ ಅಗಸರಕುಂಟೆ ಬಳಿ ಮಗಳು ಅಳುತ್ತಿದ್ದದ್ದು ಕಂಡು ಬಂದ ಹಿನ್ನಲೆ ಕೇಳಿದಾಗ ಉಜ್ವಲ್ ನೀರಿನಲ್ಲಿ ಬಿದ್ದಿರುವ ವಿಷಯ ತಿಳಿದುಬಂದಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಾಯದಿಂದ ಉಜ್ವಲ್ ಮೃತದೇಹ ಹೊರತೆಗೆದಿದ್ದಾರೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಇಂತಹ ಪ್ರಕರಣಗಳು ಸಂಭವಿಸಿದರು ಸಹ ಪುರಸಭೆ ಅಧಿಕಾರಿಗಳು ಗಾಡ ನಿದ್ರೆಗೆ ಜಾರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

(Visited 1 times, 1 visits today)