ತುಮಕೂರು


ನಗರದ ವಾರ್ಡ್ ನಂಬರ್ ೩೪ ರ ಎಳ್ಳರಬಂಡೆ ಮತ್ತು ಸತ್ಯಮಂಗಲ ಕೊಳಚೆ ಪ್ರದೇಶಗಳು ಸೇರಿದಂತೆ ಶಿರಾ ನಗರದ ರಬ್‌ನಗರ, ಕೋಟೆ ಸ್ಲಂ, ಶಿವಾಜಿ ನಗರ ಭಾಗ-೨ ಸ್ಲಂಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯಿದೆ ೧೯೭೩ರ ಕಲಂ-೩ ರಡಿಯಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಈಗಾಗಲೇ ಕಲಂ-೩ ಪ್ರಾಥಮಿಕದಲ್ಲಿ ಘೋಷಣೆಯಾಗಿರುವ ಕೊಳಚೆ ಪ್ರದೇಶಗಳಾದ ಎಸ್,ಎನ್ ಪಾಳ್ಯ, ಮತ್ತು ಅರಳೀಮರದ ಪಾಳ್ಯ ಕಾಲೋನಿಯನ್ನು ಕಲಂ-೩ ಅಂತಿಮದಲ್ಲಿ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು. ಕೋಡಿಹಳ್ಳದಲ್ಲಿರುವ ೩೦ ಕುಟುಂಬಗಳನ್ನು ಮತ್ತು ಇಸ್ಮಾಯಿಲ್ ನಗರದ ಹಂದಿಜೋಗಿ ೩೫ ಕುಟುಂಬಗಳನ್ನು ಪುನರ್‌ವಸತಿಗೊಳಿಸಲಾಗುವುದು. ಹಾಗೂ ದಿಬ್ಬೂರು ದೇವರಾಜ್ ಅರಸು ಬಡಾವಣೆ, ಘೋಷಿತ ಕೊಳಚೆ ಪ್ರದೇಶಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನಗರಪಾಲಿಕೆಯಿಂದ ಕಲ್ಪಿಸಿಕೊಡಲು ಆಯುಕ್ತರು ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸ್ಲಂ ನಿವಾಸಿಗಳ ನಿರಂತರ ಹೋರಾಟದಿಂದ ೧೭ ಎಕರೆ ಭೂಮಿಯನ್ನು ನಿವೇಶನ ರಹಿತರಿಗೆ ನೀಡಬೇಕೆಂದು ಹಿಂದಿನ ಜಿಲ್ಲಾಧಿಕಾರಿಗಳು ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದು ವಿಶೇಷ ಪ್ರವರ್ಗದಲ್ಲಿರುವ ೪೦೦ ಒಂಟಿ ಮಹಿಳೆಯರಿಗೆ ನಿವೇಶನ ಅಥವಾ ವಸತಿ ನೀಡಲು ಭೂಮಿ ಮೀಸಲಿಡಲು ಹಿಂದಿನ ಸಭೆಯಲ್ಲಿ ತೀರ್ಮಾನವಾಗಿದೆ ಚುನವಾಣೆ ಮುಂಚಿತವಾಗಿ ೧೪ಕೊಳಚೆ ಪ್ರದೇಶಗಳಲ್ಲಿ ೧೩೫೦ ಕುಟುಂಬಗಳನ್ನು ಸಮೀಕ್ಷೆ ಮಾಡಿದಾಗ ಹಕ್ಕುಪತ್ರಗಳಿಲ್ಲದಾ ೧೮೩ ಕುಟುಂಬಗಳಿಗೆ ಅರ್ಹ ಕುಟುಂಬಗಳನ್ನು ಗುರುತಿಸಲಾಗಿದೆ. ಇವುಗಳಿಗೆ ಹಕ್ಕುಪತ್ರ ನೀಡಿಲ್ಲ. ದಿಬ್ಬೂರು ದೇವರಾಜ್ ಅರಸು ಬಡಾವಣೆಯಲ್ಲಿ ವಾಸಿಸುವ ಕುಟುಂಬಗಳಿಗೆ ಹಂಚಿಕೆ ಪತ್ರಗಳನ್ನು ನೀಡಿಲ್ಲ ಸರಿಯಾದ ಸೌಲಭ್ಯಗಳಿಲ್ಲದಿರುವುದರಿಂದ ಜನರು ಮನೆ ಖಾಲಿ ಮಾಡುತ್ತಿದ್ದಾರೆ. ಇದಕ್ಕಾಗಿ ನಗರ ಪಾಲಿಕೆ ಹಸ್ತಾಂತರ ಪಡೆದುಕೊಂಡು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸ್ಲಂ ಸಮಿತಿ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತರಾದ ದರ್ಶನ್ ಜಿಲ್ಲಾ ಕೊಳಗೇರಿ ಸಮಿತಿ ನೀಡಿರುವ ೪೦೦ ನಿವೇಶನ ರಹಿತರ ಪಟ್ಟಿಯಲ್ಲಿ ೭೨ ಪಲಾನುಭವಿಗಳು ಡಿಮ್ಯಾಂಡ್ ಸಮೀಕ್ಷೆಯಲ್ಲಿ ನೊಂದಣಿಯಾಗಿರುತ್ತಾರೆ.
ಉಳಿದ ೩೨೮ ಪಲಾನುಭವಿಗಳನ್ನು ತಂತ್ರಾAಶ ಲಭ್ಯವಾದ ಕೂಡಲೇ ನೊಂದಣಿ ಮಾಡಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿಕೊಡಲು ಕ್ರಮವಹಿಸಲಾಗುವುದು ಮಳೆಯಿಂದ ಹಾನಿಯಾಗುವ ಕೊಳಚೆ ಪ್ರದೇಶಗಳಿಗೆ ರಕ್ಷಣೆ ನೀಡುವ ಅಥವಾ ಪುನರ್ ವಸತಿಗೊಳಿಸಲು ಕ್ರಮವಹಿಸಲಾಗುವುದೆಂದರು. ಪ್ರಸ್ತುತ ಪಾಲಿಕೆ ಬಜೆಟ್‌ನಲ್ಲಿ ಪಿಎಂಎವೈ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿರುವ ಪಲಾನುಭವಿಗಳಿಗೆ ಸಾಂಕೇತಿಕ ಪ್ರಮಾಣದ ಫಲಾನುಭವಿ ಶುಲ್ಕವನ್ನು ನೇರವಾಗಿ ಸ್ಲಂ ಬೋರ್ಡ್ ಗೆ ಪಾವತಿಸಲು ಹಣ ಮೀಸಲಿಡಲಾಗುವುದೆಂದರು.
ಪದಾಧಿಕಾರಿಗಳಾದ ಅರುಣ್, ಮಾತನಾಡಿದರು.
ಸಭೆಯಲ್ಲಿ ನಗರಾಭಿವೃದ್ಧಿ ಯೋಜನಾ ನಿರ್ಧೇಶಕರಾದ ಆಂಜಿನಪ್ಪ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಲೋಕೇಶ್ವರಪ್ಪ, ಸಮಾಜ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಬೆಸ್ಕಾಂ ಕಾರ್ಯವಾನಿರ್ವಾಕ ಇಂಜಿನಿಯರ್, ಗ್ರೇಡ್-೨ ತಹಶೀಲ್ದಾರ್,
ನಗರಪಾಲಿಕೆ ಅಧಿಕಾರಿಗಳು ಹಾಗೂ ವಿವಿಧ ಸ್ಲಂಗಳ ಮುಖಡರಾದ ಜಾಬೀರ್ ಖಾನ್, ಶಂಕರಯ್ಯ, ಶಾರದಮ್ಮ, ದೊಡ್ಡರಂಗಪ್ಪ, ತಿರುಮಲಯ್ಯ, ಕೃಷ್ಣಮೂರ್ತಿ, ಮಂಗಳಮ್ಮ, ಸುಧಾ, ಪುಟ್ಟರಾಜು, ಅನ್ನಪೂರ್ಣಮ್ಮ,ನಾಗರತ್ನಮ್ಮ, ಧನಂಜಯ್, ಗೋವಿಂದ್,ಗಣೇಶ್, ಅಶ್ವತಪ್ಪ, ಶಾಬುದ್ಧಿನ್, ರಂಗನಾಥಪ್ಪ ಮುಂತಾದವರು ಪಾಲ್ಗೊಂಡಿದ್ದರು.

(Visited 1 times, 1 visits today)