ಗುಬ್ಬಿ :

ತಲ್ವಾ‌ರ್ ಎಂಬ ಮಾರಕಾಸ್ತ್ರ ಹಿಡಿದು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಭೂಪ.!! ಎಂಬ ಶರ‍್ಷಿಕೆಯಡಿ ಸುದ್ದಿ ಬಿತ್ತರವಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ತಲ್ವಾರ್ ಝಳಪಿರುವ ಬಗ್ಗೆ ಇಬ್ಬರ ಮೇಲೆ ಪ್ರಕರಣ ದಾಖಲಿಸಿ ರ‍್ವ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಗುಬ್ಬಿ ಪಟ್ಟಣದಲ್ಲಿ ಕೆಲ ಮುಸ್ಲಿಂ ಸಮುದಾಯದ ಯುವಕರು ನಡುರಸ್ತೆಯಲ್ಲಿ ಸ್ನೇಹಿತರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಮಾರಕಾಸ್ತ್ರ ಹಿಡಿದು ಕೇಕ್ ಕತ್ತರಿಸುವ ಮೂಲಕ ವಿಚಿತ್ರವಾಗಿ ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ರಸ್ತೆಯನ್ನು ಅಡ್ಡಗಟ್ಟಿ ತಲ್ವಾರ್ ಹಿಡಿದು ಬೆದರಿಸಿರುವ ಬಗ್ಗೆ ಸರ‍್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನೆಲೆ ಸುರ‍್ಣ ಪ್ರಗತಿ ವೆಬ್ ನ್ಯೂಸ್ ಪ್ರಕರಣದ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು ಇದರ ಬೆನ್ನಲ್ಲೇ ದೂರು ದಾಖಲಿಸಿ ಕ್ರಮ ಜರುಗಿಸಲಾಗಿದೆ.

ತಲ್ವಾರ್ ಜಳಪಿಸಿರುವ ಪ್ರಕರಣದ ಆರೋಪಿಗಳ ತಂಡವನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಎಸ್ಪಿ ಅಶೋಕ್ ಕೆ.ವಿ ವಿಶೇಷ ತಂಡವನ್ನ ರಚಿಸಿ ಕರ‍್ಯಾಚರಣೆ ಕೈಗೊಂಡು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ, ಸೈಯದ್ ಶರೂಕ್ ಎಂಬತನನ್ನು ಬಂಧಿಸಲಾಗಿದ್ದು ಮತ್ತೊಬ್ಬ ಆರೋಪಿ ಮುಕೀಶ್ ಪಾಷಾ ಎಂಬಾತನನ್ನು ಬಂಧಿಸುವ ಕರ‍್ಯ ಎಲ್ಲಾ ಆಯಾಮಗಳಿಂದಲೂ ಮುಂದುವರಿದಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

ಸೈಯದ್ ಶರೂಕ್ ಮತ್ತು ಮುಕೀಶ್ ಪಾಷಾ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ತಮ್ಮಗಳ ಸ್ವಾಧೀನದಲ್ಲಿದ್ದ ತಲ್ವಾರ್ ಗಳನ್ನ ತೋರಿಸಿದ್ದು ವಿಚಿತ್ರವಾಗಿ ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಜನರು ಮುಂದೆ ಹೋಗದಂತೆ ಅಡ್ಡಗಟ್ಟಿ ತಲ್ವಾರ್ / ತೆಗೆದುಕೊಂಡು ರಸ್ತೆಗೆ ಅಡ್ಡಲಾಗಿ ಗೀಚಿ ಜೋರಾಗಿ ಚಿರಾಡಿಕೆ → ತಲ್ವಾರ್ ಹಿಡಿದುಕೊಂಡು ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಕೇಕ್ ಕತ್ತರಿಸಿದ್ದಾರೆ ಎಂದು ಇಬ್ಬರ ಮೇಲೆ ಗುಬ್ಬಿ ಪೊಲೀಸ್ ಠಾಣಾ . ೩೭೭/೨೦೨೪ ೦ ೧೨೬ ೨(೨) ೮/೨ ೨೫ ೧ (ಬಿ) ರ‍್ಮ್ಸ್ ಆಕ್ಟ್ ೧೯೫೯ ರೀತಿಯ ಪ್ರಕರಣ ದಾಖಲು ಮಾಡಲಾಗಿರುತ್ತದೆ.

(Visited 1 times, 1 visits today)